ETV Bharat / bharat

ಸಮುದ್ರದ ಅಲೆಗಳ ಎದುರು ಧೈರ್ಯವಾಗಿ ಮುನ್ನುಗುವ ದಿಟ್ಟೆ ಈಕೆ: ಹೈದರಾಬಾದ್​ ಯುವತಿಯ ಸ್ಪೂರ್ತಿ ಕಥೆ ಇದು

author img

By

Published : Feb 1, 2023, 1:09 PM IST

ಜೀವನದ ಕಷ್ಟಗಳ ವಿರುದ್ಧ ಈಜಿ ಸೈಲರ್​ ಆದ ಯುವತಿ - ನೀರು ಎಂದರೆ ಭಯ ಎನ್ನುತ್ತಲೇ ಅದರ ವಿರುದ್ಧವೇ ಸ್ಪರ್ಧೆಗೆ ಇಳಿದ ಪ್ರೀತಿ - ಈಕೆ ಆಟ ಮೆಚ್ಚಿದ ಆನಂದ್​ ಮಹೀಂದ್ರ

ಸಮುದ್ರದ ಅಲೆಗಳ ಎದುರು ಧೈರ್ಯವಾಗಿ ಮುನ್ನುಗುವ ದಿಟ್ಟೆ ಈಕೆ; ಹೈದ್ರಾಬಾದ್​ ಯುವತಿಯ ಸ್ಪೂರ್ತಿ ಕಥೆ ಇದು
hyderabad-girl-priti-success-story-in-sailing

ಹೈದರಾಬಾದ್​: ಸಮುದ್ರದ ಮಧ್ಯೆ ಏಳುವ ಅಲೆಗಳ ಬಗ್ಗೆ ಆಕೆಗೆ ಹೆದರಿಕೆ ಇಲ್ಲ. ಸಮುದ್ರದ ಅಲೆಗಳಿಗಿಂತ ಜೀವನದ ಅನುಭವಗಳು ಆಕೆಗೆ ಭಯ ಮೂಡಿಸಿತು. ಪ್ರೀತಿ ಕೊಂಗರಾ ಜೀವನದ ಸ್ಪೂರ್ತಿಯ ಕಥೆ ಇದು. ತಂದೆ ಪ್ರೀತಿ ಕಾಣದೇ, ತಾಯಿ ಆಶ್ರಯದಲ್ಲಿ ದಿಟ್ಟೆಯಾಗಿ ಬೆಳೆದ 18 ವರ್ಷದ ಹೈದರಾಬಾದ್​ನ ಯುವತಿ ಇದೀಗ ಸೈಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನಡೆಸುತ್ತಿದ್ದಾಳೆ. ಅಲೆಗಳ ವಿರುದ್ಧ ಯಾವುದೇ ಅಂಜಿಕೆ ಇಲ್ಲದೇ, ಅದರ ಲಯಕ್ಕೆ ತಕ್ಕಂತೆ ಆಡುವ ಈಕೆ ಆಟ ಎಂತಹವರನ್ನು ಮೋಡಿ ಮಾಡುತ್ತದೆ. ಈಕೆಯ ಅದ್ವೀತಿಯ ಪ್ರದರ್ಶನಕ್ಕೆ ಆನಂದ್​ ಮಹೀಂದ್ರಾ ಕೂಡ ಮೆಚ್ಚುಗೆ ಪಡೆದಿದ್ದಾರೆ.

ಇನ್ನು ತಮ್ಮ ಜೀವನದ ಯಶಸ್ಸಿನ ಕುರಿತು ಮಾತನಾಡಿರುವ ಪ್ರೀತಿ ಕೊಂಗಾರಾ, ನನ್ನ ತಂದೆ ಜೊತೆಗಿನ ಯಾವುದೇ ಖುಷಿಯ ಕ್ಷಣಗಳು ನೆನಪಿಲ್ಲ. ಅವರು ವಾಚ್​ಮನ್​ ಆಗಿದ್ದರು. ನನಗೆ 7 ವರ್ಷ ಇದ್ದಾಗ ಅವರು ಅನಾರೋಗ್ಯಕ್ಕೆ ಒಳಗಾದರು. ನನ್ನ ತಾಯಿ ವಿಜಯಲಕ್ಷ್ಮಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ, ನನ್ನ ಮತ್ತು ನನ್ನ ಅಕ್ಕ ಪ್ರಿಯಳನ್ನು ಬೆಳೆಸಿದರು. ನಾವಿಬ್ಬರು ಸ್ವಲ್ಪ ದೊಡ್ಡವರಾದ ಬಳಿಕ ಪಾರ್ಟ್​ ಟೈಮ್​ ಕೆಲಸ ಮಾಡುವ ಮೂಲಕ ತಾಯಿಗೆ ನೆರವಾದೆವು.

ನಾನು ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾಗ ನಂದಿ ಕಲ್ಯಾಣ್​​ ಫೌಂಡೇಷನ್​ ವಾಟರ್​ ಗೇಮ್ಸ್​ನಲ್ಲಿ ಆಸಕ್ತಿ ಹೊಂದಿರುವವರಿಗೆ ಆಯ್ಕೆಗೆ ಶಾಲೆಗೆ ಬಂದರು. ಇದರಲ್ಲಿ ನಾನು ಆಯ್ಕೆ ಆದೆ. ಅಲ್ಲಿಯವರೆಗೆ ನನಗೆ ನೀರು ಎಂದರೆ ಭಯ ಇತ್ತು. ನೀರಿನ ಬಳಿ ಹೋಗಲು ನನಗೆ ಹೆದರುತ್ತಿದ್ದ ನನಗೆ ನನ್ನ ತಾಯಿ ಈ ತರಬೇತಿಗೆ ಸೇರುವಂತೆ ಮನವರಿಕೆ ಮಾಡಿದರು. ಅಲ್ಲಿಂದ ನನ್ನ ಮತ್ತು ಅಲೆಗಳ ಸ್ನೇಹ ಉಂಟಾಯಿತು.

ಮೊದಲ ಬಾರಿಗೆ ಹೆದರಿಕೆ ಇತ್ತು: ತರಬೇತಿ ಆರಂಭವಾದಾಗ ನೀರಿಗಿಳಿದಾಗ ಗಾಳಿಯ ರಭಸದ ವಿರುದ್ಧ ನಿಲ್ಲಲ್ಲು ಸಾಧ್ಯವಾಗದೇ, ನೀರಿನಲ್ಲಿ ಬಿದ್ದುಬಿಟ್ಟೆ. ನನ್ನ ಮಾರ್ಗದರ್ಶಕರಾಗಿದ್ದ ಸುಹೀಂ, ನಾನು ಬಿದ್ದು ಅಳುವಾಗ ಧೈರ್ಯದಿಂದ ಮುನ್ನುಗ್ಗುವಂತೆ ಹುರುದುಂಬಿಸಿದರು. ಮತ್ತೆ ತರಬೇತಿಗೆ ಮರಳಿ, ಸ್ಪರ್ಧೆಗೆ ತಯಾರಾದೆ. 2016ರಲ್ಲಿ ತೆಲಂಗಾಣ ರಾಜ್ಯ ಸೈಲಿಂಗ್ ಚಾಂಪಿಯನ್​ ಅಲ್ಲಿ 15 ಸ್ಪರ್ಧೆಗಳ ವಿರುದ್ಧ ಸೆಣಸಿ ಬೆಳ್ಳಿ ಪದಕವನ್ನು ಗೆದ್ದೆ. ಇದೇ ವರ್ಷ, ಮನ್ಸೂನ್​ ರೆಗಾಟ್ಟಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದೆ. ನಾನು ಸೈಲಿಂಗ್​ಗೆ ಸೇರಿದಾಗಿನಿಂದ ನನ್ನ ಮಾರ್ಗದರ್ಶಕರೇ ನನ್ನ ಶಿಕ್ಷಣದ ಅಗತ್ಯತೆ, ಪೌಷ್ಟಿಕಾಂಶ ಮತ್ತು ಇತರ ಅಗತ್ಯಗಳ ಬಗ್ಗೆ ಕಾಳಜಿವಹಿಸಿದರು. ​

ಹುಸೈನ್​ನಗರದಲ್ಲಿ ತರಬೇತಿ ಪಡೆಯುತ್ತದ್ದ ನಾನು ಮೊದಲ ಬಾರಿ ಚೆನ್ನೈನಲ್ಲಿ ಸಮುದ್ರ ನೋಡಲು ಮುಂದಾದಾಗ, ಅಲ್ಲಿನ ಪ್ರಬಲ ಅಲೆಗಳು ನನಗೆ ನಡುಗುವಂತೆ ಮಾಡಿತು. ದಿಢೀರ್​ ಎಂದು ದೊಡ್ಡ ಸಮುದ್ರದ ಎದುರು ನಿಂತಾಗ ಭಯಗೊಂಡೆ. ಈ ವೇಳೆ ನಾನು ಅಂತಾರಾಷ್ಟ್ರೀಯ ಸ್ಪರ್ಧೆಗೆ ನಾನು ಆಯ್ಕೆಯಾಗುತ್ತೇನೆ ಎಂದು ನಂಬಿರಲಿಲ್ಲ. ಆದರೆ, ನಿಧಾನವಾಗಿ ನಾನು ತರಬೇತಿ ಆರಂಭಿಸಿದೆ. ಇದಾದ ಬಳಿಕ ಮುಂಬೈ, ಪಾಂಡೀಚೆರಿ, ಕೃಷ್ಣಂಪಟ್ಟಣಂ ಸಮುದ್ರದಲ್ಲಿ ಸೈಲಿಂಗ್​ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿ ಭಾರತದ ಪರವಾಗಿ ಓಮನ್​ನಲ್ಲಿ ನಾನು ಸೈಲಿಂಗ್​ ಸ್ಪರ್ಧೆಗೆ ಹೋದಾಗ ನನಗೆ ಹಿಂಜರಿಕೆ ಕಾಡಿತ್ತು. ಏಕ ಕಾಲದಲ್ಲಿ 300 ಜನರ ನಡುವೆ ನಾನು ಸ್ಪರ್ಧೆಗೆ ಇಳಿದಿದ್ದೆ ಎನ್ನುವ ಪ್ರೀತಿ ಇಲ್ಲಿಯವರೆಗೆ ನಾನು ಐದು ಚಿನ್ನದ ಪದಕ, ನಾಲ್ಕು ಬೆಳ್ಳಿ ಮತ್ತು ಐದು ಕಂಚಿನ ಪದಕವನ್ನು ಪಡೆದಿದ್ದಾರೆ. ಈ ವರ್ಷ ಸೆಪ್ಟೆಂಬರ್​ನನ್ನು ನಡೆಯಲಿರುವ ಏಷಿಯನ್​ ಗೇಮ್ಸ್​ ತರಬೇತಿಗಾಗಿ ಮುಂಬೈನಲ್ಲಿ ಒಂದು ವರ್ಷದಿಂದ ನೆಲೆಸಿದ್ದಾರೆ. ದೂರ ಶಿಕ್ಷಣದ ಮೂಲಕ ಶಿಕ್ಷಣ ಪಡೆಯುತ್ತಿದ್ದು, ನನ್ನ ಗುರಿ ಒಲಂಪಿಕ್​ ಮಿಶ್ರ ಡಬ್ಬಲ್ಸ್​ನಲ್ಲಿ ಭಾಗಿಯಾಗುವುದು. ಇದಕ್ಕಾಗಿ ನಾನು ಕಠಿಣ ಶ್ರಮ ಪಡುತ್ತಿದ್ದೇನೆ ಎನ್ನುತ್ತಾರೆ

ಹೆಮ್ಮೆ ಇದೆ: ನನ್ನ ಸೈಲಿಂಗ್​ ತರಬೇತಿ ಕುರಿತು ಎಲ್ಲ ಸಂಪೂರ್ಣ ವೆಚ್ಚ ಭರಿಸುವುದಾಗಿ ಆನಂದ್​ ಮಹೀಂದ್ರಾ ಟ್ವೀಟ್​ ಮಾಡಿದ್ದಾರೆ. ಇದು ನನಗೆ ಹೆಮ್ಮೆಯಾಗಿದೆ. ನನಗೆ ಚಾನ್ಸ್​ ಸಿಕ್ಕರೆ ನಾನು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಧನ್ಯವಾದ ತಿಳಿಸುತ್ತೇನೆ. ಯಾವುದನ್ನಾದರೂ ಕಲಿಯಬೇಕು ಎಂದರೆ, ನಿಮ್ಮ ಮನಸ್ಸಿನಲ್ಲಿನ ಭಯವನ್ನು ಹೊಡೆದು ಹೋಗಿಸಬೇಕು. ನಿಮ್ಮ ಬಗ್ಗೆ ನೀವು ನಂಬಿಕೆ ಹೊಂದಿದ್ದರೆ, ಯಶಸ್ಸು ನಿಮ್ಮ ಬಳಿ ಬರುತ್ತದೆ ಎನ್ನುವ ಮೂಲಕ ಇತರರಿಗೂ ಸ್ಪೂರ್ತಿಯಾಗಿದ್ದಾರೆ ಪ್ರೀತಿ.

ಇದನ್ನೂ ಓದಿ: ಆ ಯಂಗ್​ ಸ್ಟಾರ್​ ಬಗ್ಗೆ ಭವಿಷ್ಯ ನುಡಿದ ಸ್ಟಾರ್​ ಆಲ್​ರೌಂಡರ್​ ಜಡೇಜಾ..

ಹೈದರಾಬಾದ್​: ಸಮುದ್ರದ ಮಧ್ಯೆ ಏಳುವ ಅಲೆಗಳ ಬಗ್ಗೆ ಆಕೆಗೆ ಹೆದರಿಕೆ ಇಲ್ಲ. ಸಮುದ್ರದ ಅಲೆಗಳಿಗಿಂತ ಜೀವನದ ಅನುಭವಗಳು ಆಕೆಗೆ ಭಯ ಮೂಡಿಸಿತು. ಪ್ರೀತಿ ಕೊಂಗರಾ ಜೀವನದ ಸ್ಪೂರ್ತಿಯ ಕಥೆ ಇದು. ತಂದೆ ಪ್ರೀತಿ ಕಾಣದೇ, ತಾಯಿ ಆಶ್ರಯದಲ್ಲಿ ದಿಟ್ಟೆಯಾಗಿ ಬೆಳೆದ 18 ವರ್ಷದ ಹೈದರಾಬಾದ್​ನ ಯುವತಿ ಇದೀಗ ಸೈಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನಡೆಸುತ್ತಿದ್ದಾಳೆ. ಅಲೆಗಳ ವಿರುದ್ಧ ಯಾವುದೇ ಅಂಜಿಕೆ ಇಲ್ಲದೇ, ಅದರ ಲಯಕ್ಕೆ ತಕ್ಕಂತೆ ಆಡುವ ಈಕೆ ಆಟ ಎಂತಹವರನ್ನು ಮೋಡಿ ಮಾಡುತ್ತದೆ. ಈಕೆಯ ಅದ್ವೀತಿಯ ಪ್ರದರ್ಶನಕ್ಕೆ ಆನಂದ್​ ಮಹೀಂದ್ರಾ ಕೂಡ ಮೆಚ್ಚುಗೆ ಪಡೆದಿದ್ದಾರೆ.

ಇನ್ನು ತಮ್ಮ ಜೀವನದ ಯಶಸ್ಸಿನ ಕುರಿತು ಮಾತನಾಡಿರುವ ಪ್ರೀತಿ ಕೊಂಗಾರಾ, ನನ್ನ ತಂದೆ ಜೊತೆಗಿನ ಯಾವುದೇ ಖುಷಿಯ ಕ್ಷಣಗಳು ನೆನಪಿಲ್ಲ. ಅವರು ವಾಚ್​ಮನ್​ ಆಗಿದ್ದರು. ನನಗೆ 7 ವರ್ಷ ಇದ್ದಾಗ ಅವರು ಅನಾರೋಗ್ಯಕ್ಕೆ ಒಳಗಾದರು. ನನ್ನ ತಾಯಿ ವಿಜಯಲಕ್ಷ್ಮಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ, ನನ್ನ ಮತ್ತು ನನ್ನ ಅಕ್ಕ ಪ್ರಿಯಳನ್ನು ಬೆಳೆಸಿದರು. ನಾವಿಬ್ಬರು ಸ್ವಲ್ಪ ದೊಡ್ಡವರಾದ ಬಳಿಕ ಪಾರ್ಟ್​ ಟೈಮ್​ ಕೆಲಸ ಮಾಡುವ ಮೂಲಕ ತಾಯಿಗೆ ನೆರವಾದೆವು.

ನಾನು ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾಗ ನಂದಿ ಕಲ್ಯಾಣ್​​ ಫೌಂಡೇಷನ್​ ವಾಟರ್​ ಗೇಮ್ಸ್​ನಲ್ಲಿ ಆಸಕ್ತಿ ಹೊಂದಿರುವವರಿಗೆ ಆಯ್ಕೆಗೆ ಶಾಲೆಗೆ ಬಂದರು. ಇದರಲ್ಲಿ ನಾನು ಆಯ್ಕೆ ಆದೆ. ಅಲ್ಲಿಯವರೆಗೆ ನನಗೆ ನೀರು ಎಂದರೆ ಭಯ ಇತ್ತು. ನೀರಿನ ಬಳಿ ಹೋಗಲು ನನಗೆ ಹೆದರುತ್ತಿದ್ದ ನನಗೆ ನನ್ನ ತಾಯಿ ಈ ತರಬೇತಿಗೆ ಸೇರುವಂತೆ ಮನವರಿಕೆ ಮಾಡಿದರು. ಅಲ್ಲಿಂದ ನನ್ನ ಮತ್ತು ಅಲೆಗಳ ಸ್ನೇಹ ಉಂಟಾಯಿತು.

ಮೊದಲ ಬಾರಿಗೆ ಹೆದರಿಕೆ ಇತ್ತು: ತರಬೇತಿ ಆರಂಭವಾದಾಗ ನೀರಿಗಿಳಿದಾಗ ಗಾಳಿಯ ರಭಸದ ವಿರುದ್ಧ ನಿಲ್ಲಲ್ಲು ಸಾಧ್ಯವಾಗದೇ, ನೀರಿನಲ್ಲಿ ಬಿದ್ದುಬಿಟ್ಟೆ. ನನ್ನ ಮಾರ್ಗದರ್ಶಕರಾಗಿದ್ದ ಸುಹೀಂ, ನಾನು ಬಿದ್ದು ಅಳುವಾಗ ಧೈರ್ಯದಿಂದ ಮುನ್ನುಗ್ಗುವಂತೆ ಹುರುದುಂಬಿಸಿದರು. ಮತ್ತೆ ತರಬೇತಿಗೆ ಮರಳಿ, ಸ್ಪರ್ಧೆಗೆ ತಯಾರಾದೆ. 2016ರಲ್ಲಿ ತೆಲಂಗಾಣ ರಾಜ್ಯ ಸೈಲಿಂಗ್ ಚಾಂಪಿಯನ್​ ಅಲ್ಲಿ 15 ಸ್ಪರ್ಧೆಗಳ ವಿರುದ್ಧ ಸೆಣಸಿ ಬೆಳ್ಳಿ ಪದಕವನ್ನು ಗೆದ್ದೆ. ಇದೇ ವರ್ಷ, ಮನ್ಸೂನ್​ ರೆಗಾಟ್ಟಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದೆ. ನಾನು ಸೈಲಿಂಗ್​ಗೆ ಸೇರಿದಾಗಿನಿಂದ ನನ್ನ ಮಾರ್ಗದರ್ಶಕರೇ ನನ್ನ ಶಿಕ್ಷಣದ ಅಗತ್ಯತೆ, ಪೌಷ್ಟಿಕಾಂಶ ಮತ್ತು ಇತರ ಅಗತ್ಯಗಳ ಬಗ್ಗೆ ಕಾಳಜಿವಹಿಸಿದರು. ​

ಹುಸೈನ್​ನಗರದಲ್ಲಿ ತರಬೇತಿ ಪಡೆಯುತ್ತದ್ದ ನಾನು ಮೊದಲ ಬಾರಿ ಚೆನ್ನೈನಲ್ಲಿ ಸಮುದ್ರ ನೋಡಲು ಮುಂದಾದಾಗ, ಅಲ್ಲಿನ ಪ್ರಬಲ ಅಲೆಗಳು ನನಗೆ ನಡುಗುವಂತೆ ಮಾಡಿತು. ದಿಢೀರ್​ ಎಂದು ದೊಡ್ಡ ಸಮುದ್ರದ ಎದುರು ನಿಂತಾಗ ಭಯಗೊಂಡೆ. ಈ ವೇಳೆ ನಾನು ಅಂತಾರಾಷ್ಟ್ರೀಯ ಸ್ಪರ್ಧೆಗೆ ನಾನು ಆಯ್ಕೆಯಾಗುತ್ತೇನೆ ಎಂದು ನಂಬಿರಲಿಲ್ಲ. ಆದರೆ, ನಿಧಾನವಾಗಿ ನಾನು ತರಬೇತಿ ಆರಂಭಿಸಿದೆ. ಇದಾದ ಬಳಿಕ ಮುಂಬೈ, ಪಾಂಡೀಚೆರಿ, ಕೃಷ್ಣಂಪಟ್ಟಣಂ ಸಮುದ್ರದಲ್ಲಿ ಸೈಲಿಂಗ್​ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿ ಭಾರತದ ಪರವಾಗಿ ಓಮನ್​ನಲ್ಲಿ ನಾನು ಸೈಲಿಂಗ್​ ಸ್ಪರ್ಧೆಗೆ ಹೋದಾಗ ನನಗೆ ಹಿಂಜರಿಕೆ ಕಾಡಿತ್ತು. ಏಕ ಕಾಲದಲ್ಲಿ 300 ಜನರ ನಡುವೆ ನಾನು ಸ್ಪರ್ಧೆಗೆ ಇಳಿದಿದ್ದೆ ಎನ್ನುವ ಪ್ರೀತಿ ಇಲ್ಲಿಯವರೆಗೆ ನಾನು ಐದು ಚಿನ್ನದ ಪದಕ, ನಾಲ್ಕು ಬೆಳ್ಳಿ ಮತ್ತು ಐದು ಕಂಚಿನ ಪದಕವನ್ನು ಪಡೆದಿದ್ದಾರೆ. ಈ ವರ್ಷ ಸೆಪ್ಟೆಂಬರ್​ನನ್ನು ನಡೆಯಲಿರುವ ಏಷಿಯನ್​ ಗೇಮ್ಸ್​ ತರಬೇತಿಗಾಗಿ ಮುಂಬೈನಲ್ಲಿ ಒಂದು ವರ್ಷದಿಂದ ನೆಲೆಸಿದ್ದಾರೆ. ದೂರ ಶಿಕ್ಷಣದ ಮೂಲಕ ಶಿಕ್ಷಣ ಪಡೆಯುತ್ತಿದ್ದು, ನನ್ನ ಗುರಿ ಒಲಂಪಿಕ್​ ಮಿಶ್ರ ಡಬ್ಬಲ್ಸ್​ನಲ್ಲಿ ಭಾಗಿಯಾಗುವುದು. ಇದಕ್ಕಾಗಿ ನಾನು ಕಠಿಣ ಶ್ರಮ ಪಡುತ್ತಿದ್ದೇನೆ ಎನ್ನುತ್ತಾರೆ

ಹೆಮ್ಮೆ ಇದೆ: ನನ್ನ ಸೈಲಿಂಗ್​ ತರಬೇತಿ ಕುರಿತು ಎಲ್ಲ ಸಂಪೂರ್ಣ ವೆಚ್ಚ ಭರಿಸುವುದಾಗಿ ಆನಂದ್​ ಮಹೀಂದ್ರಾ ಟ್ವೀಟ್​ ಮಾಡಿದ್ದಾರೆ. ಇದು ನನಗೆ ಹೆಮ್ಮೆಯಾಗಿದೆ. ನನಗೆ ಚಾನ್ಸ್​ ಸಿಕ್ಕರೆ ನಾನು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಧನ್ಯವಾದ ತಿಳಿಸುತ್ತೇನೆ. ಯಾವುದನ್ನಾದರೂ ಕಲಿಯಬೇಕು ಎಂದರೆ, ನಿಮ್ಮ ಮನಸ್ಸಿನಲ್ಲಿನ ಭಯವನ್ನು ಹೊಡೆದು ಹೋಗಿಸಬೇಕು. ನಿಮ್ಮ ಬಗ್ಗೆ ನೀವು ನಂಬಿಕೆ ಹೊಂದಿದ್ದರೆ, ಯಶಸ್ಸು ನಿಮ್ಮ ಬಳಿ ಬರುತ್ತದೆ ಎನ್ನುವ ಮೂಲಕ ಇತರರಿಗೂ ಸ್ಪೂರ್ತಿಯಾಗಿದ್ದಾರೆ ಪ್ರೀತಿ.

ಇದನ್ನೂ ಓದಿ: ಆ ಯಂಗ್​ ಸ್ಟಾರ್​ ಬಗ್ಗೆ ಭವಿಷ್ಯ ನುಡಿದ ಸ್ಟಾರ್​ ಆಲ್​ರೌಂಡರ್​ ಜಡೇಜಾ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.